Slide
Slide
Slide
previous arrow
next arrow

ವಕೀಲ ಜಿ.ಟಿ.ನಾಯ್ಕರಿಗೆ ಟಿಕೆಟ್ ನೀಡುವಂತೆ ಆಗ್ರಹ

300x250 AD

ಕಾರವಾರ: ಲೋಕಸಭಾ ಚುನಾವಣೆಯಲ್ಲಿ ವಕೀಲರಾದ ಜಿ.ಟಿ.ನಾಯ್ಕ ಅವರಿಗೆ ಟಿಕೆಟ್ ನೀಡುವಂತೆ ಜಿ.ಟಿ.ನಾಯ್ಕ ಅಭಿಮಾನಿ ಬಳಗ ಆಗ್ರಹಿಸಿದೆ.

ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಟಿ.ನಾಯ್ಕ ಅಭಿಮಾನಿ ಬಳಗದ ಶ್ರೀಕಾಂತ ಮೊಗೇರ, ಹಿರಿಯ ವಕೀಲರೂ ಆಗಿರುವ ಜಿ.ಟಿ.ನಾಯ್ಕ ಅವರು ಜಿಲ್ಲೆಯ್ಲಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಸಮಾಜಮುಖಿ ಕಾರ್ಯ ಮಾಡುತ್ತಿರುವ ಅವರು ಹಲವು ಹೋರಾಟಗಳಲ್ಲಿ ಮುಂಚೂಣಿ ನಾಯಕರಾಗಿ, ಬಡ ಕುಟಂಬಗಳಿಗೆ ಸಹಾಯ- ಸಹಕಾರ ನೀಡಿ ನೆರವಾಗಿದ್ದಾರೆ. ಅವರಿಗೆ ಕಾನೂನಿನ ಅರಿವೂ ಇದ್ದು, ಲೋಕಸಭೆಯಲ್ಲಿ ಮಂಡನೆಯಾಗುವ ಕಾಯಿದೆಗಳಿಗೆ ಸಂಬ0ಧಿಸಿ ಸಮರ್ಥ ವಾದ ಮಂಡಿಸಿ ಚರ್ಚೆಗೆ ಅನುವು ಮಾಡಿಕೊಡಲಿದ್ದಾರೆ ಎಂದರು.

ಒ0ದುವೇಳೆ ಜಿ.ಟಿ.ನಾಯ್ಕ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಗೆಲುವು ಖಚಿತ. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದು, ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವ ಮೂಲಕ ಪಕ್ಷ ಸಂಘಟನೆಗೂ ಒತ್ತು ನೀಡಿದ್ದಾರೆ. ಹೀಗಾಗಿ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

300x250 AD

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿನಾಯಕ ಹರಿಕಂತ್ರ, ವಿನಯ ಬಾನಾವಳಿ, ಕಿಶೋರ ಬಾನಾವಳಿ, ಅಜಯ, ರೋಷನ್ ಬಾನಾವಳಿ, ಸಚಿನ ಹರಿಕಂತ್ರ, ತೌಫೀಕ ಸಯ್ಯದ್ ಇದ್ದರು.

Share This
300x250 AD
300x250 AD
300x250 AD
Back to top